ರುಸ್ತುಂಗೆ ಶುಭ ಹಾರೈಸಿದ ನಾಗಚೈತನ್ಯ

somashekhar
ಶಿವರಾಜ್ ಕುಮಾರ್ ಅಭಿನಯದ ರುಸ್ತುಂ ಸಿನಿಮಾ ಬಿಡುಗಡೆಗೆ ಇನ್ನೇನು ಒಂದೇ ಒಂದು ದಿನ ಬಾಕಿ ಇದೆ. ಈಗಾಗಲೇ ಬಾಲಿವುಡ್ ನ ಪ್ರಮುಖರು ಈ ಸಿನಿಮಾ ನೋಡುವಂತೆ ಕರೆ ನೀಡಿದ್ದಾರೆ. ಈ ಸಾಲಿಗೆ ಇದೀಗ ನಟ ನಾಗಚೈತನ್ಯ ಸಹ ಶುಭ ಹಾರೈಸಿದ್ದಾರೆ. 


ರವಿವರ್ಮ ಬಾಲಿವುಡ್ ಮಟ್ಟದಲ್ಲೂ ದೊಡ್ಡ ಹೆಸರು ಮಾಡಿದವರು. ಅವರ ರುಸ್ತುಂ ಸಿನಿಮಾಗೆ ಶುಭ ಕೋರುತ್ತಿದ್ದೇನೆ ಎಂದು ನಾಗಚೈತನ್ಯ ಹೇಳಿದ್ದಾರೆ. ಅಲ್ಲದೇ ಶಿವರಾಜ್ ಕುಮಾರ್ ಹಾಗೂ ವಿವೇಕ್ ಒಬೆರಾಯ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ವಿಶೇಷ ಏನಂದರೆ, ನಾನು ರವಿವರ್ಮ ಅವರ ಜೊತೆಗೆ ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಅವರ ಕೆಲಸದ ಶೈಲಿ ನನಗೆ ತುಂಬ ಇಷ್ಟ ಎಂದು ನಾಗಚೈತನ್ಯ ವಿಡೀಯೋದಲ್ಲಿ ಹೇಳಿದ್ದಾರೆ. 


ಅಷ್ಟೇ ಅಲ್ಲದೇ ರವಿವರ್ಮಾ ಅವರಿಗೂ ಶುಭ ಹಾರೈಸಿರೋ ನಾಗಚೈತನ್ಯ, ಸಿನಿಮಾಗೆ ಒಳ್ಳೆಯದಾಗಲಿ. ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. 


ಈ ಸಿನಿಮಾದಲ್ಲಿ ನಾಯಕನಟ ಶಿವರಾಜ್ ಕುಮಾರ್ ಅವರು, ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಶ್ರದ್ಧಾ ಶ್ರೀನಾಥ್, ಮಯೂರಿ ಹಾಗೂ ರಚಿತಾ ರಾಮ್ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಳೆಯೇ ಚಿತ್ರ ರಿಲೀಸ್ ಆಗುತ್ತಿದ್ದು, ಶಿವಣ್ಣ ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದೆ. 


Find Out More:

Related Articles: