ಸ್ಯಾಂಡಲ್ ವುಡ್ ನಟರಿಗೆ ಎದುರಾಗುತ್ತಾ ಸಂಕಷ್ಟ..!?

somashekhar
2019ರ ಆರಂಭದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸ್ಯಾಂಡಲ್ ವುಡ್ ನ ಕೆಲ ನಟರು ಹಾಗೂ ನಿರ್ಮಾಪಕರ ಮನೆ ಮೇಲೆ ಹಾಗೂ ಕಚೇರಿ ಮೇಲೆ ದಾಳಿ ಮಾಡಿದ್ದರು. ನಂತರ ಅಲ್ಲಿನ ಕೆಲವು ದಾಖಲೆ ಪತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಕುರಿತು ಇದೀಗ ಮತ್ತೊಂದು ಶಾಕಿಂಗ್ ನ್ಯೂಸ್ ಎದುರಾಗಿದೆ.


ಹೌದು, ಕರ್ನಾಟಕ ಮತ್ತು ಗೋವಾ ವಲಯದ ಪ್ರಧಾನ ಮುಖ್ಯ ಆಯುಕ್ತರಾದ ಬಿ.ಆರ್.ಬಾಲಕೃಷ್ಣನ್ ಅವರು ಮಾಹಿತಿ ನೀಡಿದ್ದು, ಸ್ಯಾಂಡಲ್ ವುಡ್ ನಟರಿಗೆ ಆತಂಕ ಎದುರಾಗಿದೆ. ನಟರು ಮತ್ತು ನಿರ್ಮಾಪಕರ ಮನೆ ಮೇಲೆ ದಾಳಿ ನಡೆಸಿದ ವೇಳೆ ಮೂರು ಕೋಟಿ ರೂಪಾಯಿಗೂ ಹೆಚ್ಚು ಬೆನಾಮಿ ಹಾಗೂ ಕಪ್ಪು ಹಣದ ಬಗ್ಗೆ ಸಾಕ್ಷ್ಯ ಸಿಕ್ಕಿದೆ ಎಂದು ಹೇಳಿದ್ದಾರೆ. 


ಹೌದು, ಬೆಂಗಳೂರಿನ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ನಡೆದ ಆದಾಯ ತೆರಿಗೆ ದಿನಾಚರಣೆ ವೇಳೆ ಅವರು ಮಾತನಾಡಿದ್ದಾರೆ. ಈ ನಟರು ಮತ್ತು ನಿರ್ಮಾಪಕರು ಬೇನಾಮಿ ಆಸ್ತಿ ಹೊಂದಿದ್ದು, ಹಾಗೂ ಕಪ್ಪು ಹಣವನ್ನು ವರ್ಗಾವಣೆ ಮಾಡಿರೋ ಬಗ್ಗೆ ಮಾಹಿತಿ ಇದೆ, ಹೀಗಾಗಿ ಈ ಕುರಿತು ತನಿಖೆ ಚುರುಕಿನಿಂದಲೇ ಸಾಗಿದೆ ಎಂದಿದ್ದಾರೆ. 


Find Out More:

Related Articles: