ಸ್ಯಾಂಡಲ್ ವುಡ್ ನಲ್ಲಿ ಆತ್ಮ ತಿರುಗಾಡುತ್ತಿದೆ

somashekhar

ಸ್ಯಾಂಡಲ್ ವುಡ್ ನಲ್ಲಿ ಇದೀಗ ಎಲ್ಲಿ ನೋಡಿದರೂ ಆತ್ಮ ತಿರುಗಾಡುತ್ತಿದೆ. ಹೌದು, ಶಾಕ್ ಆದರೂ ಕೂಡ ನಂಬಲೇ ಬೇಕಾದ ವಿಷಯವಿದು. ಈ ಆತ್ಮವು ಇದೀಗ ಎಲ್ಲರನ್ನು ಬೆಚ್ಚಿಬೀಳಿಸುತ್ತಿದೆ. ಅದು ಯಾರು, ಏನು ಈ ಆತ್ಮದ ಅಸಲೀ ಕಥೆ ಅಂತ ನಾವ್ ಹೇಳ್ತೀವಿ ಕೇಳಿ.

ಇದು ಯಾವ ಕೊಲೆಯ ಸೇಡಿನ ಪ್ರತೀಕಾರಕ್ಕೆ ಆತ್ಮಗಳನ್ನು ಸೃಷ್ಟಿಸಿಕೊಂಡು ಕತೆಯನ್ನು ಕೊನೆ ತನಕ ನಿಗೂಢತೆಯಲ್ಲೇ ನಿರೂಪಿಸಿದ ರೀತಿ ಇಲ್ಲಿ ಅದ್ಭುತ. ಆರಂಭದಿಂದ ಅಂತ್ಯದವರೆಗೂ ಅದು ಪ್ರೇಕ್ಷಕರನ್ನು ಕುರ್ಚಿಯ ತುದಿಯಲ್ಲಿ ಕುಳ್ಳಿರಿಸಿ, ನೋಡಿಸಿಕೊಂಡು ಹೋಗುವ ರೀತಿ ಇನ್ನು ವಿಶೇಷ.
ಯಾವುದು ಈ ಆತ್ಮ, ಇದರಿಂದ ನಮಗೇನು ಅನಾಹುತ ಎಂದು ಶಾಕ್ ಆಗ ಬೇಡಿ. ಏಕೆಂದರೆ ಈ ಆತ್ಮ ಮತ್ತಾವುದು ಅಲ್ಲ, ಸ್ಯಾಂಡಲ್ ವುಡ್ ರಣಭೂಮಿ ಚಿತ್ರ. ಹೌದು ಇತ್ತೀಚೆಗಷ್ಟೇ ಚಿತ್ರ ತೆರೆ ಕಂಡಿದ್ದು, ಇದೊಂದು ಆತ್ಮಗಳ ಕತೆ. ಅದು ಶುರುವಾಗುವುದು ಪ್ರೇಮದ ಜ್ವಾಲೆ ಮತ್ತು ಆಸ್ತಿ ಕಬಳಿಸಲು ನಡೆದ ಕೊಲೆಗಳ ಮೂಲಕ. ಕತೆಯ ಪ್ರಮುಖ ಪಾತ್ರಧಾರಿಗಳಾದ  ವಿಕ್ರಮ್, ವೇದ ಸುಮತಿ ಒಳ್ಳೆಯ ಸ್ನೇಹಿತರು. ಸುಮತಿಗೆ ವಿಕ್ರಮ ಮೇಲೆ ಒಂದಷ್ಟು ಪ್ರೀತಿ.ಆದರೆ ವಿಕ್ರಮ್‌ಗೆ ವೇದ ಮೇಲೆ ಮನಸ್ಸು. ವೇದಳಿಗೂ ವಿಕ್ರಮ್ ಕಂಡರೆ ಇಷ್ಟ. ಕೊನೆಗೆ ಅವರಿಬ್ಬರು ಪ್ರೀತಿಸುತ್ತಾರೆನ್ನುವ ವಿಷಯ ಗೊತ್ತಾದಾಗ ಸುಮತಿಗೆ ಕೋಪ. ಅದೇ ಕೋಪಕ್ಕೆ ಅಸ್ತ್ರವಾಗುವುದು ಒಂದು ವಿಡಿಯೋ. ಆ ವಿಡಿಯೋ ಮೇಲೆ ರಾಜಕಾರಣಿ ಶಿವಬಸಪ್ಪ, ಇನ್ಸ್‌ಸ್ಪೆಕ್ಟರ್ ಸತ್ಯ ಪ್ರಕಾಶ್ ಕಣ್ಣು.

ವಿಡಿಯೋ ಇದೆ ಎನ್ನುವ ಕಾರಣಕ್ಕಾಗಿಯೇ ಬಲಿಯಾದವರು ವಿಕ್ರಮ್ ಮತ್ತು ವೇದ. ಅವರ ಸಾವಿಗೆ ಪ್ರತೀಕಾರವಾಗಿ ನಡೆಯುವ ಕತೆಯೇ ಮುಂದಿನದ್ದು. ತನಿಖಾ ಕಾರ್ಯದ ಅವರ ನಟನೆಯ ಹಾವಭಾವ ಚುರುಕಾಗಿದೆ. ಕುತೂಹಲ ತರಿಸುವ ಈ ಕತೆಗೆ ಪ್ರದೀಪ್ ವರ್ಮ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಕೂಡ ಸಾಥ್ ನೀಡಿದೆ. ವಿಜಯ ಭರಮ ಸಾಗರ್ ಹಾಗೂ ಹರೀಶ್ ಶೃಂಗ ಸಾಹಿತ್ಯದ ಗೀತೆಗಳು ಹಿತವೆನಿಸುತ್ತವೆ. ನಾಗರ್ಜುನ್ ಅವರ ಛಾಯಾಗ್ರಹಣ, ವಿಕ್ರಮ್ ಮೋರ್ ಅವರ ಸಾಹಸ ಮೆಚ್ಚವಂತಹದ್ದು.




Find Out More:

Related Articles: