ಇನ್ನು ಮುಂದೆ ಮಾತು ನಿಲ್ಲಿಸುತ್ತೇನೆಂದ ಮಂಗಳೂರು ಮೀನು

somashekhar
ಮಂಗಳೂರು ಮೀನು ಹೇಗೆ ಮಾತನಾಡುತ್ತದೆಂದು ಆಶ್ಚರ್ಯವಾಯ್ತಾ. ನಾವು ಹೇಳುತ್ತೇವೆ ಕೇಳಿ. ಕರಾವಳಿಯ ಬೆಡಗಿ ಅನುಷ್ಕಾ ಶೆಟ್ಟಿ ಮೂಲತಹ ಕರ್ನಾಟಕದ ಮಂಗಳೂರಿನವರಾಗಿದ್ದು , ಇವರು ಪ್ರಖ್ಯಾತ ಗೊಂಡಿದ್ದು ಮಾತ್ರ ತೆಲುಗಿನಲ್ಲಿ. ಸುಮಾರು 30ಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿರುವ ಅನುಷ್ಕಾ ಶೆಟ್ಟಿ  ಭಾಗಶ:ಹ ಚಿತ್ರಗಳು ಪ್ರಯೋಗಾತ್ಮಕ ಸಿನಿಮಾಗಳು ಆಗಿರುತ್ತವೆ. ಬಿಲ್ಲಾ, ರುದ್ರಮದೇವಿ,  ಭಾಗಮತಿ, ಬಾಹುಬಲಿ ಇನ್ನು ಮುಂತಾದ ಚಿತ್ರಗಳಲ್ಲಿ ಇವರು ನಟಿಸಿ ತಮ್ಮದೇಯಾದ ಅಭಿಮಾನಿ ಬಳಗ ಹೊಂದಿದ್ದಾರೆ. 

ಸೈಜ್ ಝೀರೋ ಚಿತ್ರಕ್ಕಾಗಿ ತಮ್ಮ ದೇಹದ ತೂಕವನ್ನು ಹೆಚ್ಚಿಸಿಕೊಂಡ ಟಾಲಿವುಡ್ ಸ್ವೀಟಿ ತದನಂತರ ಹೆಚ್ಚಾದ ತೂಕದಿಂದ ಸಾಕಷ್ಟು ಸಿನಿಮಾಗಳ ಆಫರ್ ಕಳೆದುಕೊಂಡಿದ್ದಾರೆ. ಇದೇ ಕಾರಣದಿಂದ ಅನುಷ್ಕ ಶೆಟ್ಟಿ ಅವರು ವಿದೇಶಕ್ಕೆ ತೆರಳಿ ದೇಹದ ತೂಕವನ್ನು ಇಳಿಸಿಕೊಳ್ಳುವ ಚಿಕಿತ್ಸೆ ಪಡೆದ ನಂತರ ಭಾರತಕ್ಕೆ ಮರಳಿದ್ದಾರೆ. ಮತ್ತಷ್ಟು ಡಿಟೇಲ್ಸ್ ಇಲ್ಲಿದೆ.

ಆದರೆ ಈಗ ಬಂದಿರುವ ಬಿಸಿಬಿಸಿ ಸುದ್ದಿ ಏನೆಂದರೆ, ನಮ್ಮ ದೇವಸೇನಾಗೆ  ಇನ್ನು ಮುಂದೆ ಮಾತನಾಡಲು ಆಗುವುದಿಲ್ಲವಂತೆ. ಈ ವಿಷಯ ಕೇಳಿದ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿತ್ತು. ಆದರೆ ನಿಜಕ್ಕೂ ಗಾಬರಿಯಾಗಬೇಡಿ ವಿಷಯ ಏನೆಂದರೆ ನಮ್ಮ  ರುದ್ರಮ್ಮದೇವಿ ಗೆ ಹಾಲಿವುಡ್ ನಿಂದ ಸಿಹಿ ಸುದ್ದಿಯೊಂದು ಬಂದಿದೆ. ಅದೇನೆಂದರೆ ಇಂಗ್ಲೀಷ್ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಒದಗಿಬಂದಿತ್ತು ಈ ಸಿನಿಮಾಕ್ಕಾಗಿ ಫೋಟೋಶೂಟ್ ಸಹ ಆಗಿದೆ. 

ನಿಶಬ್ದ ಎಂಬ ಹೊಸ ಚಿತ್ರದ ಪ್ರಾಜೆಕ್ಟನ್ನು ಕೈಗೆ ತೆಗೆದುಕೊಂಡ ನಮ್ಮ ಮಂಗಳೂರು ಬೆಡಗಿ ಚಿತ್ರದಲ್ಲಿ ಮೂಕಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ಆರ್ ಮಾಧವನ್, ಅಂಜಲಿ, ಶಾಲಿನಿ ಪಂಡೆ ,ಸುಬ್ಬರಾಜು ಹಾಗೂ ಮೈಕಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ . ಈ ಚಿತ್ರವು  ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮಲಯಾಳಂ ಸೇರಿ ಪಂಚ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ. ಆದರೆ ಕನ್ನಡದಲ್ಲಿ ಚಿತ್ರ ತರೆಕಾಣದಿರುವುದೇ ಬೇಸರದ ಸಂಗತಿಯಾಗಿದೆ. ಕನ್ನಡದಲ್ಲಿ ಚಿತ್ರ ಬರಲಿ ಎಂಬುದು ಅಭಿಮಾನಿಗಳ ಆಸೆ ನಿರಾಸೆಯಾಗಿದೆ. 

Find Out More:

Related Articles: