ಸ್ಪೋಟಕ ಮಾಹಿತಿ ಬಹಿರಂಗ ಮಾಡಿದ ಮನ್ಸೂರ ಖಾನ್!

somashekhar
ಐಎಂಎ ಕಂಪನಿಯ ಬಹುಕೋಟಿ ಹಗರಣ ವಂಚನೆ ಪ್ರಕರಣಕ್ಕೆ ಇದೀಗ ಮತ್ತೊಂದು ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಇದರ ಮುಖ್ಯ ಆರೋಪಿ ಮನ್ಸೂರ ಖಾನ್ ಅವರನ್ನು ಬಂಧಿಸಿದ ಅಧೀಕಾರಿಗಳು ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮನ್ಸೂರ ಖಾನ್ ಅವರು ಸ್ಪೋಟಕ ಮಾಹಿತಿಯನ್ನು ಹೊರ ಹಾಕಿದ್ದಾರೆ. 


ಹೌದು, ಇಡಿ ಅಧೀಕಾರಿಗಳು ವಿಚಾರಣೆ ನಡೆಸುತ್ತಿದ್ದ ವೇಳೆಯಲ್ಲಿ 1000 ಕ್ಕೂ ಹೆಚ್ಚು ಕೋಟಿ ಮೌಲ್ಯದ ವ್ಯವಹಾರದಾ ರಹಸ್ಯವನ್ನು ಇಡಿ ಅಧಿಕಾರಿಗಳು ಪಡೆದಿದ್ದಾರೆ. ಅಲ್ಲದೇ ಕೆಲವು ಪ್ರಭಾವಿಗಳಿಗೆ ಹಂಚಿಕೆ ಆಗಿರುವ ಲಾಭಾಂಶದ ಕುರಿತು ಮಾಹಿತಿ ನೀಡಿದ್ದಾನೆ. 


ಮನ್ಸೂರ ಖಾನ್ ಗೆ ಇದೀಗ ಜೀವ ಬೆದರಿಕೆ ಇದೆ ಎನ್ನಲಾಗಿದೆ. ಹೀಗಾಗಿ ಆತನಿಗೆ ಹೈ ಸೆಕ್ಯೂರಿಟಿ ನೀಡಲಾಗಿದೆ. ಈ ಬಿಗಿ ಭದ್ರತೆಯಲ್ಲಿ ಮನ್ಸೂರ ಖಾನ್ ಅವರನ್ನು ರಾತ್ರಿಯಿಡೀ ಬಿಗಿ ಭದ್ರತೆಯಲ್ಲಿ ರಕ್ಷಣೆ ಒದಗಿಸಲಾಗುತ್ತಿದೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಐಎಂಎ ಕಂಪನಿಯಲ್ಲಿ ಹೂಡಿಕೆ ಮಾಡಿದ್ದ ಜನರ ಹಣವನ್ನು ವಾಪಾಸ್ ನೀಡಿದರೆ ಸಾಕು ಎನ್ನುವಂತಾಗಿದೆ.


Find Out More:

Related Articles: