ನಾನು ಕಲ್ಲುಬಂಡೆ, ಕರಗೋ ಮಾತೇ ಇಲ್ಲ

Soma shekhar
ದಾವಣಗೆರೆ: ನಾನು ಯಾರು ಅಂತ ಗೊತ್ತಲ್ಲ, ನಾನು ಕಲ್ಲುಬಂಡೆ ಇದ್ದಂತೆ, ನಾನ್ಯಾವತ್ತು ಕರಗಲ್ಲ. ಮಂತ್ರಿ ಸ್ಥಾನ ನೀರಿನ ಮೇಲೆ ಗುಳ್ಳೆ, ಈಗ ಎತ್ತಿನ ಬಂಡಿಯಲ್ಲಿ ಬಂದೆ. ಆ ಬಂಡಿ ಮುಂದೆ ಗೂಟದ ಕಾರು ಲೆಕ್ಕವೇ ಇಲ್ಲ ಎಂದು ದಾವಣಗೆರೆ ಯಲ್ಲಿ ಬಿಜೆಪಿ ಶಾಸಕರೊಬ್ಪರು ಗುಡುಗಿದ್ದಾರೆ. ಹೌದು, ಆ ಶಾಸಕ ಯಾರು ಗೊತ್ತಾ!?
 
ನಾನು ಕಲ್ಲು ಬಂಡೆ ಎಂದು ಗುಡುಗಿರುವುದು ಶಾಸಕ ಎಂಪಿ ರೇಣುಕಾಚಾರ್ಯ. ಹೌದು, ಗೂಟದ ಕಾರು ಬೇಕು ಎನ್ನುವವರಿಗೆ ಮಂತ್ರಿ ಮಾಡಬೇಡಿ ಎಂಬ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಕೆಂಚಿಕೊಪ್ಪ ಗ್ರಾಮದಲ್ಲಿ ತಿರುಗೇಟು ನೀಡಿದ್ದಾರೆ, ನಾನು ಸಚಿವ ಸ್ಥಾನ ಆಕಾಂಕ್ಷಿ ಎಂದು ಹೇಳಿದ್ದು ನಿಜ. ಆದರೆ ನನಗೆ ಗೂಟದ ಕಾರು ಲೆಕ್ಕಕ್ಕೇ ಇಲ್ಲ ಎಂದಿದ್ದಾರೆ. ನನಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯ. ಅಧಿಕಾರ ಶಾಶ್ವತ ಅಲ್ಲ ಯಾರೇ ಟೀಕೆ ಮಾಡಿದರು ಪರವಾಗಿಲ್ಲ.
 
ನಾನು ಬಂಡೆಯಿದ್ದಂತೆ ಕರಗಲ್ಲ. ಸಚಿವ ಸಂಪುಟ ವಿಚಾರದಲ್ಲಿ ಸಿಎಂಗೆ ಪರಾಮಾಧಿಕಾರವಿದೆ. ಅವರು ಹಾಗೂ ಕೇಂದ್ರದ ವರಿಷ್ಠರು ಸೇರಿ ಸಚಿವ ಸ್ಥಾನ ತೀರ್ಮಾನ ಮಾಡುತ್ತಾರೆ. ನನಗೆ ಕ್ಷೇತ್ರದ ಅಭಿವೃದ್ಧಿ ಮುಖ್ಯ ಎಂದರು. ಬಸ್ ನಿಲ್ದಾಣ ದಲ್ಲಿನ ಮಹಿಳೆ ಇದ್ದಾಗೆ ಎಂದು ಸಿಎಂ ಇಬ್ರಾಹಿಂ ಹೇಳಿಕೆಗೆ ತಿರುಗೇಟು ನೀಡಿದ ರೇಣುಕಾಚಾರ್ಯ, ಸಿಎಂ ಇಬ್ರಾಹಿಂ ಅವರದ್ದು ಎಲುಬಿಲ್ಲದ ನಾಲಿಗೆ. ಆತ ಜೋಕರ್ ವಚನ ಹೇಳೋಕೆ ಅವರನ್ನು ಬಳಸಿ ಕೊಳ್ಳುತ್ತಾರೆ. ಸಿಎಂ ಇಬ್ರಾಹಿಂ ನೀಚ ಭದ್ರಾವತಿಯಲ್ಲಿ ಏನೇನೂ ಪ್ರಕರಣ ಮಾಡಿದ್ದಾರೆ ಎಲ್ಲ ಗೊತ್ತಿದೆ. ಇಡೀ ಭದ್ರಾವತಿಯನ್ನು ಕೋಮು ಗಲಭೆಗೆ ತಳ್ಳಿದವರು ಎಂದು ಆರೋಪಿಸಿದರು.
 
ಈ ಹಿಂದೆ ಶಾಸಕ ರೇಣುಕಾಚಾರ್ಯ ಒಂದೂವರೆ ಗಂಟೆಗಳ ಕಾಲ ಬಸ್ ಡ್ರೈವ್  ಮಾಡಿ ಜನ ಸಾಮಾನ್ಯರ ಗಮನ ಸೆಳೆದಿದ್ದರು. ಅದರ ರೇಣುಕಾಚಾರ್ಯ ಜನಸಾಮಾನ್ಯರೊಂದಿಗೆ ಸಾಕಷ್ಟು ಬಾರಿ ಬೆರೆತಿರುವುದು ನೋಡಿದ್ದೇವೆ. ಇದೀಗ ಬಸನಗೌಡ ಯತ್ನಾಳ್  ಗೆ ಟಾಂಗ್ ನೀಡಿದ್ದು ಭಾರೀ ಚರ್ಚೆ ಯಾಗುತ್ತಿದೆ

Find Out More:

Related Articles: